ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವದಗಿ ಅವರು, ಸುಧಾಕರ್ ನೇಮಕಕ್ಕೆ ಸಂಬಂಧಿಸಿದ ಕಡತಗಳನ್ನು ನ್ಯಾಯಪೀಠಕ್ಕೆ ನೀಡಿದರು. ಕಡತ ಪರಿಶೀಲಿಸಿದ ನ್ಯಾಯಪೀಠ, ‘2019ರ ಜೂನ್ 20ರಂದು ಸುಧಾಕರ್ ನೇಮಕ ಮಾಡಲಾಗಿದೆ. ಏತನ್ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದ ಕಡತಗಳನ್ನು ಕೋರ್ಟ್ಗೆ ಸಲ್ಲಿಸಿ ಎಂದು ಕಳೆದ ತಿಂಗಳ 30ರಂದು ಆದೇಶಿಸಲಾಗಿದೆ. ಆದರೆ, ಸೆಪ್ಟೆಂಬರ್ 3ರಂದು ಮುಖ್ಯಮಂತ್ರಿ ನೇಮಕಕ್ಕೆ ಅನುಮೋದನೆ ನೀಡಿರುವುದು ನಿಯಮ
ಬಾಹಿರ ಅಲ್ಲವೇ’ ಎಂದು ಪ್ರಶ್ನಿಸಿತು.