ರೈತ ಮುಖಂಡರೊಂದಿಗೆ ಮೊಬೈಲ್ ಮೂಲಕ ಮಾತನಾಡಿದ ಮುಖ್ಯಮಂತ್ರಿ, ‘ನ. 19ರಂದು ಬೆಳಗಾವಿಯಲ್ಲಿ ಸಭೆ ನಡೆಸುತ್ತೇನೆ. ಅಹವಾಲು ಆಲಿಸುತ್ತೇನೆ’ ಎಂದು ಭರವಸೆ ನೀಡಿದರು. ನಂತರ ಬೆಳಗಾವಿ ಪ್ರತಿಭಟನಕಾರರು ಹೋರಾಟವನ್ನು ಹಿಂಪಡೆದರು. ಆದರೆ, ಸಿಎಂ ಮಾತುಕತೆ ಫಲಪ್ರದವಾಗುವವರೆಗೂ ಧರಣಿ ಮುಂದುವರೆಸುವುದಾಗಿ ಮುಧೋಳದ ರೈತ ಮುಖಂಡರು ತಿಳಿಸಿದ್ದಾರೆ.