ರಾಜ್ಯದ 67 ಸಕ್ಕರೆ ಕಾರ್ಖಾನೆಗಳು 2018–19ನೇ ಸಾಲಿನಲ್ಲಿ ಅಂದಾಜು 4 ಕೋಟಿ ಟನ್ ಕಬ್ಬು ನುರಿಸಿದ್ದು, ಕಬ್ಬು ಪೂರೈಸಿದ ರೈತರಿಗೆ ಎಂಆರ್ಪಿ ದರದ ಅನ್ವಯ ₹3 ಸಾವಿರ ಕೋಟಿ ಬಾಕಿ ಪಾವತಿ ಮಾಡಿಲ್ಲ. ಸರ್ಕಾರ ಕಬ್ಬು ಬಾಕಿ ಕೊಡಿಲು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಬಾಕಿ ಪಾವತಿ ಮಾಡದ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.