ಬಾಗಲಕೋಟೆ:ಕಬ್ಬು ದರ ನಿಗದಿ, ಬಾಕಿ ಬಿಲ್ಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಮುಧೋಳದಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಡೆಸುತ್ತಿರುವ ಹೋರಾಟ ಭಾನುವಾರವೂ ಮುಂದುವರೆದಿದೆ.
ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಎದುರುಶನಿವಾರ ಮಧ್ಯರಾತ್ರಿ1.30ರ ವರೆಗೆ ಧರಣಿ ನಡೆಸಿದ್ದ ಪ್ರತಿಭಟನಾ ನಿರತರು, ಬೆಳಿಗ್ಗೆ 10:30ಕ್ಕೆ ಮತ್ತೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಕಬ್ಬಿಗೆ ದರ ನಿಗದಿ ಹಾಗೂ ಬಾಕಿ ಬಿಲ್ ಕೊಡುವರೆಗೂ ರನ್ನ ಕಾರ್ಖಾನೆ ಮುಂದೆ ಹೋರಾಟಕ್ಕೆ ನಿರ್ಧರಿಸಲಾಗಿದ್ದು, ಮುಂಜಾಗ್ರತೆಯಾಗಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ.