ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸಾಶನ ದೊರೆಯದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಅಂಗವಿಕಲ: ತನಿಖೆಗೆ ಆದೇಶ

ವಾರ್ಷಿಕ ₹ 15 ಸಾವಿರ ಆದಾಯ; ಮಾಸಾಶನಕ್ಕೆ ತಡೆ
Last Updated 12 ಫೆಬ್ರುವರಿ 2019, 9:12 IST
ಅಕ್ಷರ ಗಾತ್ರ

ತುಮಕೂರು: ಮಾಸಾಶನ ದೊರೆಯದಿದ್ದಕ್ಕೆ ಮನ ನೊಂದು ತಾಲ್ಲೂಕಿನ ಕೋರ ಹೋಬಳಿಯ ಲಿಂಗಯ್ಯನ ಪಾಳ್ಯದ ಅಂಗವಿಕಲ ಧರಣಿಂದ್ರ (20) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಧರಣಿಂದ್ರ ಈ ಹಿಂದೆ ಮಾಸಾಶನ ಪಡೆಯುತ್ತಿದ್ದರು. ನವೀಕರಣದ ಸಮಯದಲ್ಲಿ ವಾರ್ಷಿಕ ₹ 15 ಸಾವಿರ ಆದಾಯ ಇದೆ ಎಂದು ಆದಾಯ ಪ್ರಮಾಣ ಪತ್ರದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ನಮೂದಿಸಿದರು‌. ಇದರಿಂದ ಮಾಸಾಶನಕ್ಕೆ ತಡೆ ಬಿದ್ದಿತು. ಸಾಯುವ ಮುನ್ನ ಈ ಬಗ್ಗೆ ವಿಡಿಯೊ ಸಹ ಮಾಡಿದ್ದಾರೆ. ಅದರಲ್ಲಿ ತಹಶಿಲ್ದಾರರ್ ಪರಮೇಶ್ ಎಂಬುವವರು ಮಾಸಾಶನ ಬರುವುದಿಲ್ಲ ಎಂದಿರುವುದನ್ನು ಧರಣಿಂದ್ರ ಉಲ್ಲೇಖಿಸಿದ್ದಾರೆ.

ತನಿಖೆ: ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ವಿಡಿಯೊದಲ್ಲಿ ಹೆಸರಿಸಿರುವ ಪರಮೇಶ್ಎಂಬುವವರು ನಮ್ಮಲ್ಲಿ ಕೇಸ್ ವರ್ಕರ್ ಇದ್ದಾರೆ. ತಪ್ಪು ಕಂಡು ಬಂದಲ್ಲಿ ಅಮಾನತುಗೊಳಿಸಲಾಗುವುದು. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ತಿಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT