ಧರಣಿಂದ್ರ ಈ ಹಿಂದೆ ಮಾಸಾಶನ ಪಡೆಯುತ್ತಿದ್ದರು. ನವೀಕರಣದ ಸಮಯದಲ್ಲಿ ವಾರ್ಷಿಕ ₹ 15 ಸಾವಿರ ಆದಾಯ ಇದೆ ಎಂದು ಆದಾಯ ಪ್ರಮಾಣ ಪತ್ರದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ನಮೂದಿಸಿದರು. ಇದರಿಂದ ಮಾಸಾಶನಕ್ಕೆ ತಡೆ ಬಿದ್ದಿತು. ಸಾಯುವ ಮುನ್ನ ಈ ಬಗ್ಗೆ ವಿಡಿಯೊ ಸಹ ಮಾಡಿದ್ದಾರೆ. ಅದರಲ್ಲಿ ತಹಶಿಲ್ದಾರರ್ ಪರಮೇಶ್ ಎಂಬುವವರು ಮಾಸಾಶನ ಬರುವುದಿಲ್ಲ ಎಂದಿರುವುದನ್ನು ಧರಣಿಂದ್ರ ಉಲ್ಲೇಖಿಸಿದ್ದಾರೆ.