ಈ ಕುರಿತು ಶುಕ್ರವಾರ ಕೆ.ಆರ್.ಪೇಟೆಯಲ್ಲಿ ಮಾಹಿತಿ ನೀಡಿದ ಸುಮ ಲತಾ ‘ಮುಖ್ಯಮಂತ್ರಿಗಳ ಹೇಳಿಕೆಯಿಂದ ನನಗೆ ಆತಂಕ ಉಂಟಾಗಿದೆ. ದಾಳಿಯನ್ನು ಮೊದಲೇ ನಿರೀಕ್ಷಿಸಿ ಅದನ್ನು ನಮ್ಮ ಮೇಲೆ ಹೊರಿಸಲು ತಂತ್ರ ರೂಪಿಸಿದ್ದಾರೆ. ದರ್ಶನ್, ಯಶ್, ಅಭಿಷೇಕ್ ಮೇಲೆ ಕಲ್ಲಿನ ದಾಳಿ ನಡೆಯುವ ಸಾಧ್ಯತೆ ಇದೆ. ಅದಕ್ಕಾಗಿ ರಕ್ಷಣೆ ಕೋರಿ ಆಯೋಗಕ್ಕೆ ದೂರು ನೀಡಿದ್ದೇನೆ’ ಎಂದರು.