ಘಟನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ‘ನನಗೆ ಏನೂ ಆಗಿಲ್ಲ. ಭಕ್ತರು ಆತಂಕಪಡಬಾರದು. ಇದೊಂದು ಸಣ್ಣ ಘಟನೆ. ಬಲೂನಿನಲ್ಲಿದ್ದ ಹಳದಿ ಬಣ್ಣ ವಾತಾವರಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹರಡಿದ್ದರಿಂದ ಭಾರಿ ಸ್ಫೋಟ ಸಂಭವಿಸಿದೆ ಎಂಬ ಭಾವನೆ ಬರುತ್ತಿದೆ. ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ನಿರಾಂತಕವಾಗಿ ನಡೆಯುತ್ತಿವೆ’ ಎಂದು ಅವರು ಹೇಳಿದರು.