ಸ್ವಗ್ರಾಮದಲ್ಲೇ ಪ್ರಾಥಮಿಕ ಶಿಕ್ಷಣ ಪಡೆದಿದ್ದ ಸ್ವಾಮೀಜಿ ಪದವಿ ಮುಗಿಸಿದ ಬಳಿಕ ದೀಕ್ಷೆ ಸ್ವೀಕರಿಸಿ, ನಾಗಠಾಣ ಮಠದ ಜವಾಬ್ದಾರಿ ವಹಿಸಿಕೊಂಡಿದ್ದರು. ಆಗಾಗ್ಗೆ ನಂದಿಪುರ ಮಠಕ್ಕೂ ಬಂದು ಹೋಗುತ್ತಿದ್ದರು. ಸಾಮೂಹಿಕ ವಿವಾಹ, ನಂದಿಪುರ ನುಡಿಹಬ್ಬ, ಕುಂಭೋತ್ಸವ ಅವರ ಸಾನ್ನಿಧ್ಯದಲ್ಲಿ ಜರುಗುತ್ತಿತ್ತು. ಅವರ ನಿಧನದಿಂದ ಭಕ್ತರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.