ಭಾರತ್ ಕಿಸಾನ್ ಯೂನಿಯನ್ ಸಂಚಾಲಕ ಯದುವೀರ್ ಸಿಂಗ್, ‘ರೈತರ ಅನುಭವಿಸುತ್ತಿರುವ ಕಷ್ಟ–ನಷ್ಟಗಳ ಕುರಿತು ನಿಖರ ಅಂಕಿ–ಅಂಶಗಳನ್ನೇ ಕೇಂದ್ರ ಸರ್ಕಾರ ಬಹಿರಂಗಪಡಿಸುತ್ತಿಲ್ಲ. ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗುವ ಮಾರುಕಟ್ಟೆ ವ್ಯವಸ್ಥೆಯನ್ನೇ ರೂಪಿಸಿಲ್ಲ. ರೈತಪರ ಅಲ್ಲದವರನ್ನು ಅಧಿಕಾರದಿಂದ ಇಳಿಸಲು, ರೈತ ಸಂಘಟನೆಗಳು ರಣತಂತ್ರ ರೂಪಿಸಲಿವೆ’ ಎಂದು ಹೇಳಿದರು.