ಸರ್ಕಾರಿ ಕಾರ್ಯಕ್ರವಲ್ಲ: ‘ತಿಡಗುಂದಿ ಜಲಕಾಲುವೆ ಮೂಲಕ ನನ್ನ ಕ್ಷೇತ್ರಕ್ಕೆ ನೀರು ಹರಿದು ಬಂದಿರುವುದರಿಂದ ಗಂಗಾ ಪೂಜೆ ಮಾಡಿ, ಬಾಗಿನ ಅರ್ಪಿಸಿದ್ದೇನೆ. ಎಲ್ಲರನ್ನು ಆಹ್ವಾನಿಸಿ, ಸಮಾರಂಭ ಮಾಡಲು ಇದು ಸರ್ಕಾರಿ ಕಾರ್ಯಕ್ರಮವಲ್ಲ’ ಎಂದು ಶಾಸಕ ಎಂ.ಬಿ.ಪಾಟೀಲ ಹೇಳುವ ಮೂಲಕ ಲೋಕಾರ್ಪಣೆಗೆ ಆಕ್ಷೇಪವೆತ್ತಿದ್ದ ಇಂಡಿ ಶಾಸಕರ ವಿರುದ್ಧ ಹರಿಹಾಯ್ದಿದ್ದಾರೆ.