‘ನಾನು ನಾಲ್ಕು ಬಾರಿ ಮುಂಬೈಗೆ ಹೋಗಿದ್ದೇನೆ. ಕಾಮಾಟಿಪುರ ಕುರಿತು ನನಗೇನೂ ಗೊತ್ತಿಲ್ಲ. ಆದರೆ, ಅದರ ಬಗ್ಗೆ ಕೇಳಿದ್ದೆ ಅಷ್ಟೇ. ಮಾತಿಗಾಗಿ ಕಾಮಾಟಿಪುರ ಹೇಳಿಕೆ ನೀಡಿದ್ದೆ. ನನ್ನ ಮಾತಿನಿಂದ ಕ್ಷೇತ್ರದ ಜನರಿಗೆ, ಅಕ್ಕ–ತಂಗಿಯರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ. ಈ ನಡುವೆ, ‘ನಾರಾಯಣಗೌಡ ಕೆ.ಆರ್.ಪೇಟೆಯನ್ನು ಬಾಂಬೆ ಸ್ಲಂ ಮಾಡುತ್ತಾನೆ’ ಎಂದು ಹೇಳುವ ಮೂಲಕ ತಮ್ಮಣ್ಣ ಮತ್ತೊಮ್ಮೆ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.