ಜನರು ಗುಂಪು ಸೇರುವುದನ್ನು ತಪ್ಪಿಸಲು ನಗರದ ವಿವಿಧ ಬಡಾವಣೆಗಳು ಮತ್ತು ಸ್ಥಳಗಳಿಗೆ ಹಾಲು, ತರಕಾರಿ ಮತ್ತು ಆಹಾರ ಸಾಮಗ್ರಿಗಳನ್ನು ಬಸ್ಗಳ ಮೂಲಕವೇ ತಲುಪುವಂತೆ ಮಾಡಬೇಕು. ಮಾರಾಟಗಾರರು ಬಸ್ನ ಮೆಟ್ಟಿಲುಗಳ ಮೇಲೆ ನಿಂತು ಅಥವಾ ಬಸ್ಗಳ ಪಕ್ಕದಲ್ಲಿ ಇಟ್ಟುಕೊಂಡು ಸರಕುಗಳನ್ನು ಮಾರಾಟ ಮಾಡಬೇಕು.ನಾಗರಿಕರು ಅಂತರ ಕಾಯ್ದುಕೊಂಡು ಸರತಿಯ ಸಾಲಿನಲ್ಲಿ ನಿಂತು ಸರಕುಗಳನ್ನು ಖರೀದಿಸಬೇಕು ಎಂದು ಸಲಹೆ ನೀಡಿದ್ದಾರೆ.