ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ವರ್ಗಾವಣೆ: ಅರ್ಜಿ ಅವಧಿ ವಿಸ್ತರಣೆ ಸಾಧ್ಯತೆ ಕ್ಷೀಣ

ಶಿಕ್ಷಕರಿಂದ ದೂರು ಬಂದಿಲ್ಲ–ಹಿರಿಯ ಅಧಿಕಾರಿಗಳಿಂದ ಹೇಳಿಕೆ
Last Updated 17 ಜೂನ್ 2019, 18:52 IST
ಅಕ್ಷರ ಗಾತ್ರ

ಬೆಂಗಳೂರು: ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದರೂ, ಶಿಕ್ಷಕರಿಂದ ಯಾವುದೇ ದೂರು ಬಂದಿಲ್ಲ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ.

‘ಟಿಡಿಎಸ್‌ ಸಾಫ್ಟ್‌ವೇರ್‌ ಸಮಸ್ಯೆ, ಕೆಜಿಐಡಿ ತೆರೆದುಕೊಳ್ಳುತ್ತಿಲ್ಲ, ಕೆಲವರ ಮೊಬೈಲ್‌ ನಂಬರ್ ಸರಿ ಇಲ್ಲ ಮೊದಲಾದ ಸಮಸ್ಯೆಗಳ ಬಗ್ಗೆ ಕೇಳಿಬರುತ್ತಿದೆ. ಆದರೆ ಯಾವೊಬ್ಬ ಶಿಕ್ಷಕನೂ ಈ ಬಗ್ಗೆ ನಮಗೆ ದೂರು ಸಲ್ಲಿಸಿಲ್ಲ. ಕಳೆದ ವರ್ಷದ ಅರ್ಜಿಗೆ ಹೊಸದಾಗಿ ದಾಖಲೆಪತ್ರ ಸಿದ್ಧಪಡಿಸುವಲ್ಲಿ ಸಹ ಸಮಸ್ಯೆ ಆಗುತ್ತಿದೆ ಎಂದು ಯಾರೂ ಹೇಳಿಲ್ಲ. ಹೀಗಾಗಿ ಅರ್ಜಿ ಸ್ವೀಕರಿಸುವ ದಿನಾಂಕ ವಿಸ್ತರಿಸುವ ವಿಚಾರ ಇಲಾಖೆಯ ಬಳಿ ಇದ್ದಂತಿಲ್ಲ’ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ’ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT