ತಾಲ್ಲೂಕಿನ ಗೆಜ್ಜೇನಹಳ್ಳಿಯಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ತಹಶೀಲ್ದಾರ್ ಬಿ.ಎನ್. ಗಿರೀಶ್ ಮತ್ತವರ ತಂಡ ದಾಳಿ ನಡೆಸಿದೆ. ಈ ಸಂದರ್ಭ ದಂಧೆಕೋರರಿಗೆ ಅನುಮಾನ ಬಾರದಂತೆ ತಹಶೀಲ್ದಾರ್ಟಿ–ಶರ್ಟ್ ಧರಿಸಿ, ತಲೆಗೆ ಟವಲ್ ಸುತ್ತಿಕೊಂಡು, ಹೆಲ್ಮೆಟ್ ಧರಿಸಿ ಬೈಕ್ನಲ್ಲಿ ತೆರಳಿ ದಾಳಿ ನಡೆಸಿದರು. ಎರಡು ಟ್ರಾಕ್ಟರ್, ಒಂದು ಜೆಸಿಬಿಯನ್ನು ವಶಕ್ಕೆ ಪಡೆದುಕೊಂಡರು.