ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಅಧಿಕಾರಿ ಜತೆ ತೇಜಸ್ವಿ ವಾಗ್ವಾದ

Last Updated 5 ಏಪ್ರಿಲ್ 2019, 19:56 IST
ಅಕ್ಷರ ಗಾತ್ರ

ಬೆಂಗಳೂರು: ಸಮಯ ಮೀರಿದೆ ಪ್ರಚಾರ ಸಭೆ ಮುಕ್ತಾಯಗೊಳಿಸಿ ಎಂದು ಹೇಳಿದ ಚುನಾವಣಾ ಆಯೋಗದ ಅಧಿಕಾರಿಗಳ ಜತೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಶುಕ್ರವಾರ ವಾಗ್ವಾದ ನಡೆಸಿದರು.

ಬಸವನಗುಡಿಯಲ್ಲಿನ ಸಂಜೆ 7ಕ್ಕೆ ನಿಗಧಿಯಾಗಿದ್ದ ಸಭೆಗೆ ತೇಜಸ್ವಿ ಸೂರ್ಯ ರಾತ್ರಿ 9ಕ್ಕೆ ಬಂದು ಮಾತು ಆರಂಭಿಸಿದರು. ಚುನಾವಣಾ ನೀತಿ ಸಂಹಿತೆ ಪ್ರಕಾರ 9 ಗಂಟೆಗೆ ಪ್ರಚಾರದ ಅವಧಿ ಮುಗಿದಿದ್ದು, ಸಭೆ ಮುಗಿಸುವಂತೆ ಫ್ಲೈಯಿಂಗ್ ಸ್ಕ್ವಾಡ್‌ ತಂಡದ ಅಧಿಕಾರಿಗಳು ತಿಳಿಸಿದರು.

ಆದರೂ ತೇಜಸ್ವಿ ಮಾತು ಮುಂದುವರಿಸಿದಾಗ ಅಧಿಕಾರಿಗಳು ಸೈರನ್‌ ಹಾಕಿ ಸಭೆ ಮುಗಿಸುವಂತೆ ಸೂಚನೆ ನೀಡಿದರು. ಆಗ ಮಾತು ನಿಲ್ಲಿಸಿ ಅವರು ವೇದಿಕೆಯಿಂದಕೆಳಗಿಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT