ದೇವಾಲಯದ ಬಳಿ ಒಂದು ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ಯಾತ್ರಿಭವನದಲ್ಲಿ ನೀರು ಇಲ್ಲದೆ ಅದರ ಮೂಲ ಉದ್ದೇಶವೇ ಸಫಲವಾಗಿಲ್ಲ. ಕೆಲವೇ ಕೊಳವೆಬಾವಿಗಳು ಹಾಗೂ ಟ್ಯಾಂಕರ್ ಮೂಲಕ ಕೊಡುವ ನೀರೆ ಇಲ್ಲಿನ ಸಾವಿರಕ್ಕೂ ಹೆಚ್ಚಿನ ಮನೆಯವರಿಗೆ ಆಶ್ರಯ. ಇಂತಹ ಸನ್ನಿವೇಶದಲ್ಲಿ ಗ್ರಾಮದ ಶ್ಯಾನುಬೋಗ್ ನರಸಿಂಗರಾವ್ ಎಂಬುವವರ ನೂರು ವರ್ಷಕ್ಕೂ ಹಿಂದಿನ ಬಾವಿಯಲ್ಲಿ ಸದಾ ಕಾಲ ನೀರು ಇರುತ್ತದೆ.