‘ಕಳ್ಳರಿಬ್ಬರು ಮನೆಗೆ ನುಗ್ಗಿದ್ದರು. ಕೂಡಲೇ ಪಾರ್ಥಸಾರಥಿ ಅವರ ಮೊಬೈಲ್ಗೆ ಸಂದೇಶ ಹೋಗಿತ್ತು. ಎಚ್ಚೆತ್ತ ಅವರು, ಅಲ್ಲಿಂದಲೇ ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯಗಳನ್ನು ಮೊಬೈಲ್ನಲ್ಲಿ ವೀಕ್ಷಿಸಿದ್ದರು. ನಂತರ, ವಾಟ್ಸ್ಆ್ಯಪ್ನಲ್ಲಿ ಸ್ನೇಹಿತರಿಗೆ ವಿಷಯ ತಿಳಿಸಿದ್ದರು. ಪೊಲೀಸರನ್ನು ಕರೆದುಕೊಂಡು ಮನೆ ಬಳಿ ಹೋಗುವಂತೆ ಹೇಳಿದ್ದರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.