ಮೇಲುಕೋಟೆ: ಇಲ್ಲಿನ ಚೆಲುವ ನಾರಾಯಣ ಸ್ವಾಮಿ ದೇಗುಲದಲ್ಲಿ ಭಾನುವಾರ ದೇವರ ದರ್ಶನ ಮಾಡುತ್ತಿದ್ದ ಮಹಿಳೆಯ ವ್ಯಾನಿಟಿ ಬ್ಯಾಗ್ನಿಂದ ₹1 ಲಕ್ಷ ಕಳ್ಳತನವಾಗಿದೆ.
ಬೆಂಗಳೂರಿನ ಮಾಲಿನಿ ಎಂಬುವರು ದೇವರ ದರ್ಶನಕ್ಕಾಗಿ ಕುಟುಂಬ ಸಮೇತ ಬಂದಿದ್ದರು. ಬೆಳಿಗ್ಗೆ 11 ಗಂಟೆ ಸಮಯದಲ್ಲಿ ಮಹಿಳೆಯರ ಗುಂಪೊಂದು ಭಕ್ತರ ಸೋಗಿನಲ್ಲಿ ಬಂದು ಬ್ಯಾಗಿನಲ್ಲಿದ್ದ ₹1ಲಕ್ಷ ಹಾಗೂ 500 ಅಮೆರಿಕ ಡಾಲರ್ ಕಳ್ಳತನ ಮಾಡಿದ್ದಾರೆ.
ಮಂಗಳಾರತಿ ತಟ್ಟೆಗೆ ಹಣ ಹಾಕಲು ಬ್ಯಾಗ್ ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಅನುಮಾನಗೊಂಡು ಮೂವರು ಮಹಿಳೆಯರನ್ನು ಭಕ್ತರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಣ ದೋಚಿದ ಮಹಿಳೆಯರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.