‘ಈ ಕಟ್ಟುಕತೆಗಳ ಹೊರತಾಗಿಯೂ ನಮ್ಮ ಸಂಸ್ಕೃತಿಯ ಮೂಲವನ್ನು ನಾವು ಇಲ್ಲಿಂದಲೇ ಕಟ್ಟಿಕೊಂಡಿದ್ದೇವೆ.ಧರ್ಮರಾಯ ಜೂಜಿಗೆ ದಾಸನಾಗಿದ್ದ ವ್ಯಕ್ತಿ. ಜೂಜಾಡಿ ರಾಜ್ಯ ಕಳೆದುಕೊಂಡಿದ್ದಲ್ಲದೇ, ವಿರಾಟ ರಾಜನಿಗೂ ಜೂಜಾಟ ಕಲಿಸಿದವನು. ಹಿರಿಯಣ್ಣ ಎಂಬ ಕಾರಣಕ್ಕೆ ಉಳಿದ ತಮ್ಮಂದಿರು ಧರ್ಮರಾಯನನ್ನು ವಿರೋಧಿಸಲಿಲ್ಲ. ಇದೇ ಸಂಸ್ಕೃತಿ ಇಂದಿಗೂ ಉಳಿದಿದೆ. ಕುಟುಂಬದಲ್ಲಿ ಹಿರಿಯ ಅಣ್ಣನಿಗೆ ತಂದೆಯ ನಂತರದ ಸ್ಥಾನವಿದೆ’ ಎಂದರು. ‘ಯಾವ ಸೋಲು ಅಥವಾ ಅವಮಾನವನ್ನಾದರೂ ಸಹಿಸುವ ನಮ್ಮ ಜನ, ಪತ್ನಿಯ ಮೇಲೆ ಬೇರೆಯವರು ಕಣ್ಣು ಹಾಕುವುದನ್ನು ಸಹಿಸುವುದಿಲ್ಲ. ಈ ಸಂಸ್ಕೃತಿ ಬೆಳೆದಿರುವುದು ಭೀಮನಿಂದ’ ಎಂದು ಅವರು ಪ್ರತಿಪಾದಿಸಿದರು.