ಕನಕಗಿರಿ: ಮರಳಿನ ದಿಬ್ಬ ಕುಸಿದು ಮೂರು ಮಕ್ಕಳು ಸಾವಿಗೀಡಾದ ದಾರುಣ ಘಟನೆ ಸಮೀಪದ ನವಲಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಹೊಟ್ಟೆಪಾಡಿಗಾಗಿ ಇದ್ದಿಲು ತಯಾರಿಸಿ ಜೀವನ ಸಾಗಿಸುವ ಆದಿವಾಸಿ ಕುಟುಂಬಕ್ಕೆ ಸೇರಿದ ಮಕ್ಕಳು ಇವರಾಗಿದ್ದು, ಛತ್ತೀಸಗಡದ ಮೂಲದವರಾದ ಎಕಲೇ ಎಂಬುವರ ಪುತ್ರಿ ಕನಕಾ(4), ಅರ್ಜುನ ಎಂಬುವರ ಮಕ್ಕಳಾದ ಸೋನು(7) ಮತ್ತು ಸವಿತಾ(1) ಮೃತಪಟ್ಟಿದ್ದಾರೆ.