‘ಮಹಾತ್ಮ ಗಾಂಧಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿರುವುದು ಯಾವುದೋ ಒಂದು ಧರ್ಮ–ಜಾತಿಗೋಸ್ಕರ ಅಲ್ಲ. ಎಲ್ಲ ಜನರು ಶಾಂತಿಯಿಂದ ಬದುಕಲಿ ಎಂಬ ಉದ್ದೇಶ ಅದರ ಹಿಂದೆ ಇತ್ತು. ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕು ಇದೆ. ಅದರಂತೆ ಇವರಿಗೂ (ಮುಸ್ಲಿಮರು) ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಮುಂದೆ ಬರಲು ಅವಕಾಶ ಮಾಡಿಕೊಡಬೇಕು’ ಎಂದು ಪ್ರತಿಪಾದಿಸಿದರು.