ಮಂಗಳೂರು: ಟಿಪ್ಪು ಸುಲ್ತಾನ್ ಜಯಂತಿ ಮಂಗಳೂರು, ಉಡುಪಿ ಮತ್ತು ಚಿಕ್ಕಮಗಳೂರು ನಗರಗಳಲ್ಲಿ ಶನಿವಾರ ಶಾಂತಿಯುತವಾಗಿ ನಡೆಯಿತು.
ಮೂರೂ ಕಡೆ ಬಿಜೆಪಿ., ಶ್ರೀರಾಮ ಸೇನೆ, ಬಜರಂಗದಳ ಮತ್ತು ವಿಶ್ವಹಿಂದೂಪರಿಷತ್ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಲು ಪ್ರಯತ್ನಿಸಿದರು. ಅದರೆ ಅವರನ್ನೆಲ್ಲ ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದರು.
ಕೊಪ್ಪ ತಾಲ್ಲೂಕಿನ ಹೇರೂರು ಗ್ರಾಮದ ಕೆಮ್ಮಣ್ಣುವಿನಲ್ಲಿರುವ ಕಾಮಧೇನು ಗೋ ಸೇವಾ ಕೇಂದ್ರದ ಆವರಣದಲ್ಲಿ ಶನಿವಾರ ಟಿಪ್ಪು ಜಯಂತಿಗೆ ಪರ್ಯಾಯವಾಗಿ ಹಿಂದೂ ಶೌರ್ಯ ದಿವಸ್ ಆಚರಿಸಲಾಯಿತು.