ಕೋವಿಡ್-19 ಹರಡುವುದನ್ನು ತಡೆಯಲು ಸರ್ಕಾರ ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಎಲ್ಲೆಲ್ಲಿ ಸ್ಥಳೀಯವಾಗಿ ಒಟಿಪಿಯೊಂದಿಗೆ ಆಹಾರ ಧಾನ್ಯ ಪಡೆಯಲು ತೊಂದರೆ ಇದೆಯೊ ಅಂತಹ ಪ್ರದೇಶದಲ್ಲಿ ಒಟಿಪಿ ಷರತ್ತನ್ನು ಸಡಿಲಗೊಳಿಸಲು ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗಿದೆ. ವಿತರಣೆಯಲ್ಲಿ ಯಾವುದೇ ಅಡೆತಡೆಗಳು ಉಂಟಾಗದಂತೆ ಕ್ರಮಕ್ಕೆ ಸೂಚಿಸಲಾಗಿದೆ.