ಸಾಗರ ದರ್ಶನ ಸಭಾಂಗಣದ ಹಿಂಭಾಗದ ಕಡಲತೀರದಲ್ಲಿ ಬೆಳಿಗ್ಗೆ ವಾಯು ವಿಹಾರಕ್ಕೆ ಹೋದವರು ಅವುಗಳನ್ನು ಕಂಡು ಅಚ್ಚರಿ ಪಟ್ಟರು. ನುಣ್ಣನೆಯ ಮರಳಿನ ಮೇಲೆರಾಶಿ ರಾಶಿಯಾಗಿ ಬಿದ್ದು ನರಳಾಡುತ್ತಿದ್ದ, ಮೀನುಗಳನ್ನು ಕಂಡು ಮರುಕ ವ್ಯಕ್ತಪಡಿಸಿದರು. ಆದರೆ, ಅವುಗಳನ್ನು ಮುಟ್ಟಿದರೆ ನವೆ ಉಂಟಾಗುವ ಭೀತಿಯಿಂದ ಹಾಗೂ ಬೃಹತ್ ಸಂಖ್ಯೆಯಲ್ಲಿದ್ದ ಕಾರಣ ಸಮುದ್ರಕ್ಕೆ ವಾಪಸ್ಬಿಡಲಾಗದೆ ಅಸಹಾಯಕತೆ ವ್ಯಕ್ತಪಡಿಸಿದರು.