ಈ ಬಗ್ಗೆ ಪಿಟಿಐ ಜತೆ ಮಾತನಾಡಿದ ಅಕ್ಕೈ ಪದ್ಮಶಾಲಿ, ಇತರ ಸಮುದಾಯಗಳಿಗೆ ಸಹಾಯ ಮಾಡುವಂತೆ ಪರಿಸ್ಥಿತಿ ಸುಧಾರಿಸಿಕೊಳ್ಳುವ ತನಕ ನಮಗೆ ಸರ್ಕಾರ ಪ್ಯಾಕೇಜ್ಗಳನ್ನು ಘೋಷಿಸಬೇಕು.ನಮ್ಮ ಸಮುದಾಯದತ್ತ ಸ್ಥಳೀಯ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರಗಳ ಪ್ರತಿಕ್ರಿಯೆ ನಿರಾಸೆ ತಂದಿದೆ. ಲಾಕ್ಡೌನ್ ನಮ್ಮ ಮೇಲೆ ನೇರ ಪರಿಣಾಮ ಬೀರುತ್ತದೆ. ನಮ್ಮ ದೈನಂದಿನ ಜೀವನ ಸಾಗುವುದೇ ರಸ್ತೆಯಲ್ಲಿ ಭಿಕ್ಷೆ ಬೇಡುವುದರಿಂದ ಮತ್ತು ಲೈಂಗಿಕ ಕಾರ್ಯಕರ್ತರಾಗಿ ದುಡಿಯುವುದಿಂದ. ದಿನಗೂಲಿ ಕಾರ್ಮಿಕರಂತೆ ನಮ್ಮ ದೈನಂದಿನ ಬದುಕು ದುಸ್ತರವಾಗಿದೆ. ಆಹಾರವಿಲ್ಲ, ಬಾಡಿಗೆ ಕೊಡಲು ಹಣವಿಲ್ಲ. ಎಚ್ಐವಿ ಬಾಧಿತರಿಗೆ ಔಷಧಿ ಖರೀದಿಸಲು ಹಣವಿಲ್ಲ.