ನಂತರ, ಶನಿವಾರಸಂತೆ ಪೊಲೀಸರ ಭದ್ರತೆ ಪಡೆದು ಸ್ಥಳಕ್ಕೆ ತೆರಳಿದ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಸೋಮವಾರಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಕಾರ್ಯದರ್ಶಿ ರಾಮನಳ್ಳಿ ಪ್ರವೀಣ್, ಶನಿವಾರಸಂತೆ ಹೋಬಳಿ ಘಟಕದ ಅಧ್ಯಕ್ಷ ಆನಂದ್ ಅವರು ಮರ ಕಡಿದವ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಮರಗಳ ಹನನದ ಹಿಂದೆ ಅರಣ್ಯ ಇಲಾಖೆಯೂ ಶಾಮೀಲಾಗಿದೆ ಎಂದು ಅವರೆದಾಳು ಗ್ರಾಮಸ್ಥರು ಆರೋಪಿಸಿದರು.