ಸಣ್ಣದೊಂದು ಕೊಂಬೆ ಮೇಲೆ ರೈಲು ಮುಂದಕ್ಕೆ ಹರಿದಿದೆ. ಅದನ್ನು ಗಮನಿಸಿದ ಲೋಕೊಪೈಲೆಟ್, ರೈಲು ನಿಲ್ಲಿಸಿದರು ಎಂದು ತಿಳಿದುಬಂದಿದೆ. ಅದೇ ಮಾರ್ಗದ ಇನ್ನೊಂದು ಹಳಿಯಲ್ಲಿ ಬರುತ್ತಿದ್ದ ರೈಲನ್ನು ತಡೆದ ರೈಲ್ವೆ ಸಿಬ್ಬಂದಿ, ಅನಾಹುತ ತಪ್ಪಿಸಿದ್ದಾರೆ. ಮೀರಜ್ ಕಡೆಯಿಂದ ಬೆಂಗಳೂರಿಗೆ ಹೊರಟ್ಟಿದ್ದ ಬರುತ್ತಿದ್ದ ಕೊಲ್ಹಾಪುರ–ಮಾಂಗೂರ್ ರೈಲಿನ ಎಂಜಿನ್ ಕೆಳಭಾಗದಲ್ಲಿ ಕೊಂಬೆ ಸಿಕ್ಕಿ ಹಾಕಿಕೊಂಡಿತ್ತು. ಅದನ್ನು ತೆರವುಗೊಳಿಸಲಾಯಿತು. ಈ ವೇಳೆ, ಎರಡೂ ರೈಲುಗಳು ಎದುರು–ಬದುರು ನಿಂತಿದ್ದವು. ತೆರವು ಕಾರ್ಯಾಚರಣೆಯಲ್ಲಿ ಸಿಬ್ಬಂದಿಯೊಂದಿಗೆ ಪ್ರಯಾಣಿಕರೂ ಭಾಗವಹಿಸಿದ್ದರು.