ತಾವು ನೆಟ್ಟಿರುವ ಗಿಡ ಯಾವ ಜಾತಿಯದ್ದು, ಅದರಿಂದ ಪ್ರಯೋಜನವೇನು? ಅದಕ್ಕೆ ಬೇಕಾಗುವ ನೀರಿನ ಪ್ರಮಾಣ... ಈ ರೀತಿ ಎಲ್ಲ ಮಾಹಿತಿಗಳನ್ನೂ ಅವರು ನೀಡಬಲ್ಲರು. ಜತೆಗೇ ತಮ್ಮ ಸುತ್ತಮುತ್ತಲಿನ ಜನರಿಗೂ ಪರಿಸರದ ಕುರಿತು ಅರಿವು ಮೂಡಿಸುತ್ತಿದ್ದಾರೆ. ಅರಣ್ಯ ಇಲಾಖೆಯಲ್ಲಿ ಕರ್ತವ್ಯದಲ್ಲಿದ್ದಾಗ ಅಂಕೋಲಾ, ಯಲ್ಲಾಪುರ, ಶಿರಸಿ ತಾಲ್ಲೂಕುಗಳ ವಿವಿಧೆಡೆ ಅವರು ನೆಟ್ಟ ಗಿಡಗಳೀಗಬೃಹದಾಕಾರ ತಾಳಿವೆ. ನೆರಳು ಹುಡುಕಿ ಬಂದವರಿಗೆ ಆಶ್ರಯ ನೀಡುತ್ತಿವೆ.