ಕೃಷ್ಣ ಬೈರೇಗೌಡ ಮಾತನಾಡಿ, ‘ಬೆಂಗಳೂರು ಉತ್ತರ ಕ್ಷೇತ್ರದಿಂದ ದೇವೇಗೌಡರು ಕಣಕ್ಕಿಳಿಯಬೇಕು ಎಂದು ಕ್ಷೇತ್ರ ವ್ಯಾಪ್ತಿಯ ಎಲ್ಲ ಕಾಂಗ್ರೆಸ್ ಶಾಸಕರು ಮತ್ತು ನಾಯಕರು ಮನವಿ ಮಾಡಿದ್ದೆವು. ಈ ಒಮ್ಮತದ ಅಭಿಪ್ರಾಯವನ್ನು ಅವರಿಗೆ ತಿಳಿಸಿದಾಗ, ಯೋಚಿಸಿ ಹೇಳುತ್ತೇನೆ ಎಂದಿದ್ದ ಅವರು ತಾವೇ ಬಂದು ಮಾತನಾಡಿದ್ದಾರೆ’ ಎಂದರು.