‘ಹೆದ್ದಾರಿ ನಿರ್ಮಾಣಕ್ಕೆ ಕತ್ತರಿಸಿದ ಗುಡ್ಡದ ಮೇಲ್ಭಾಗದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಗಟಾರದ ವ್ಯವಸ್ಥೆ ಇರಲಿಲ್ಲ. ಗುಡ್ಡದಲ್ಲಿ ಸಂಗ್ರಹವಾದ ಭಾರಿ ಪ್ರಮಾಣದ ಮಳೆ ನೀರಿಗೆ ಮಣ್ಣುಮೆತ್ತಗಾಯಿತು. ಇದರಿಂದ ನೀರುಎತ್ತರದಿಂದ ಕೆಳಗೆ ಧುಮುಕಿ ಹೆದ್ದಾರಿ ಹಾದು ಕೆಳ ಭಾಗದಲ್ಲಿರುವ ಜನವಸತಿ ಪ್ರದೇಶದತ್ತ ನುಗ್ಗಿತು. ನೀರಿನೊಂದಿಗೆಕಲ್ಲು, ಮಣ್ಣು ಕೊಚ್ಚಿಕೊಂಡು ಬಂದವು.ಹೆದ್ದಾರಿಯಲ್ಲಿ ನೀರು ಹರಿಯುವ ರಭಸಕ್ಕೆ ಕೆಲವು ನಿಮಿಷವಾಹನ ಸಂಚಾರವೂಸ್ಥಗಿತವಾಯಿತು’ ಎಂದು ಅವರು ತಿಳಿಸಿದರು.