ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಪ್‌ ಮೂಲಕ ಬ್ಯಾಂಕ್‌ ಖಾತೆಗೆ ಕನ್ನ: ಇಬ್ಬರು ಯುವಕರ ಬಂಧನ

Last Updated 17 ಫೆಬ್ರುವರಿ 2020, 12:44 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಸೋಮನಮರಡಿ ಗ್ರಾಮದ ಭೀಮಣ್ಣ ನಾಯಕ ಅವರ ಬ್ಯಾಂಕ್‌ ಖಾತೆಗೆ ಯುಪಿಐ ತಂತ್ರಾಂಶ (ಅ್ಯಪ್‌) ಮೂಲಕ ಕನ್ನ ಹಾಕಿ ಅಕ್ರಮವಾಗಿ ₹2,22,879 ಹಣ ದೋಚಲಾಗಿದೆ.

ಹಣ ವರ್ಗಾಯಿಸಿಕೊಂಡಿದ್ದ ಆರೋಪಿಗಳಾದ ತುಮಕೂರು ಜಿಲ್ಲೆ ಊರ್ಡಿಗೆರೆ ಗ್ರಾಮದ ಕಿರಣಕುಮಾರ್‌ ವೆಂಕಟೇಶ ಮತ್ತು ಹನುಮಂತರಾಜು ರಂಗಣ್ಣ ಅವರನ್ನು ರಾಯಚೂರು ಪೊಲೀಸರು ಬಂಧಿಸಿ ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಳೆದ ಜನವರಿ 30 ರಿಂದ ಫೆಬ್ರುವರಿ 4 ರ ಅವಧಿಯಲ್ಲಿ ಹಣ ವರ್ಗಾವಣೆಯಾಗಿತ್ತು. ಕೂಡಲೇ ಎಚ್ಚೆತ್ತ ಭೀಮಣ್ಣ ಅವರು ದೇವದುರ್ಗದ ಸೈಬರ್‌ ಠಾಣೆಗೆ ದೂರು ಸಲ್ಲಿಸಿದ್ದರು.

ಪೊಲೀಸರು ಆರೋಪಿಗಳನ್ನು ಪತ್ತೆಮಾಡಿ ಅವರ ಖಾತೆಯನ್ನು ಸ್ಥಗಿತಗೊಳಿಸಿ, ಆರೋಪಿಗಳ ಎರಡು ಮೊಬೈಲ್‌ ಜಪ್ತಿ ಮಾಡಿಕೊಂಡು ತನಿಖೆ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT