ಬೆಂಗಳೂರು: ಪ್ರಧಾನಿ ಹತ್ಯೆಗೆ ಯಾರೇ ಸಂಚು ನಡೆಸಿದ್ದರೂ ಅದು ಖಂಡನೀಯ. ಆದರೆ ಪ್ರತಿ ಮೂರು ತಿಂಗಳಿಗೊಮ್ಮೆ ‘ಹತ್ಯೆಗೆ ಸಂಚು’ ಎಂದು ಹೇಳಿ ಸುದ್ದಿ ಹಬ್ಬಿಸುವುದು, ಸಂಚಿನ ಮೂಲ ವ್ಯಕ್ತಿಯನ್ನು ಬಹಿರಂಗಪಡಿ ಸದೇ ಇರುವುದು ಅಥವಾ ಆತ ಯಾರು ಎಂದು ತಿಳಿಯದೇ ಇರುವುದು ಕೂಡಾ ಸರಿಯಲ್ಲ ಎಂದು ವಸತಿ ಸಚಿವ ಯು.ಟಿ.ಖಾದರ್ ಹೇಳಿದರು.