ಮಂಗಳೂರು ಉತ್ತರ ವಿಭಾಗದ ಎಸಿಪಿ ಕೆ.ಯು. ಬೆಳ್ಳಿಯಪ್ಪ ನೇತೃತ್ವದ ತಂಡ ಆದಿತ್ಯ ರಾವ್ನನ್ನು ಮಲ್ಪೆಗೆ ಕರೆತಂದಿತ್ತು. ಬಾಂಬ್ ಬೆದರಿಕೆ ಕರೆ ಮಾಡಿದ ಬಳಿಕ ಆದಿತ್ಯ ಮೊಬೈಲ್ನಿಂದ ಸಿಮ್ ತೆಗೆದು ಬಿಸಾಡಿದ್ದ ಎನ್ನಲಾಗಿದ್ದು, ಪೊಲೀಸರು ಗೂಡಂಗಡಿಯ ಸುತ್ತಲೂ ಶೋಧ ನಡೆಸಿದರು. ಆದರೆ, ಯಾವುದೇ ವಸ್ತುಗಳು ಪತ್ತೆಯಾಗಲಿಲ್ಲ.