ಆರೋಪಿ ಅಧಿಕಾರಿ ಉಡುಪಿ ಕಚೇರಿ, ಮಂಗಳೂರಿನ ವಾಸದ ಮನೆ ಹಾಗೂ ಕಾರವಾರದ ವಾಸದ ಮನೆಗಳ ಮೇಲೆ ದಾಳಿ ಮಾಡಿ ಶೋಧ ನಡೆಸಲಾಗುತ್ತಿದೆ. ಎಸಿಬಿ ಅಧಿಕಾರಿಗಳಿಗೆ ಇದುವರೆಗೆ 30 ಗ್ರಾಂ ಚಿನ್ನ, 1 ಕೆ.ಜಿ ಬೆಳ್ಳಿ, 2 ಕಾರು, ಮೂರು ದ್ವಿಚಕ್ರ ವಾಹನ, 50 ಲಕ್ಷ ಠೇವಣಿ ಮತ್ತು ₹ 22.80 ಲಕ್ಷ ಮೌಲ್ಯದ ಗೃಹಬಳಕೆ ವಸ್ತುಗಳು ಸಿಕ್ಕಿವೆ.ಮಂಗಳೂರಿನಲ್ಲಿ 1 ಮನೆ, 9 ನಿವೇಶನ, 2 ಎಕರೆ ಜಮೀನು; ಪುತ್ತೂರಿನಲ್ಲಿ 1 ಮನೆ, 2ನಿವೇಶನ; ಬೆಂಗಳೂರಿನಲ್ಲಿ 3 ನಿವೇಶನ; ಮೈಸೂರಿನಲ್ಲಿ 1 ಮನೆ, 1 ನಿವೇಶನ, 26 ಗುಂಟೆ ಜಮೀನು ಹಾಗೂ ಬೆಳಗಾವಿಯಲ್ಲಿ 2 ಫ್ಲ್ಯಾಟ್ ಮತ್ತು 8 ಗುಂಟೆ ಜಮೀನನ್ನು ವರ್ಣೇಕರ್ ಹೊಂದಿದ್ದಾರೆ.