ಉಪ್ಪಿನಂಗಡಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮಿ ಡಿ.20ರ ಶುಕ್ರವಾರ ಬೆಳಿಗ್ಗೆ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಅದರ ಹಿಂದಿನ ದಿನವಾದ (ಡಿ.19) ಗುರುವಾರ ಹುಟ್ಟೂರು ರಾಮಕುಂಜಕ್ಕೆ ಭೇಟಿ ನೀಡಿದ್ದರು. ಆಗ ಜ್ವರ ಸುಡುತ್ತಿದ್ದರೂ, ತಾನು ಕಳಿತ ಶಾಲೆ, ತನ್ನ ವಿದ್ಯಾಸಂಸ್ಥೆಗಳಲ್ಲಿ ನಡೆದಾಡಿದ್ದರು. ಇದೇ ಇಲ್ಲಿ ಅವರ ಕೊನೆಯ ಹೆಜ್ಜೆ ಗುರುತುಗಳಾಗಿವೆ.