ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಳವಿ ಚೆನ್ನಬಸವೇಶ್ವರ ಜಾತ್ರೆ: ಮಠಾಧೀಶರಿಗೆ ಆಹ್ವಾನವಿಲ್ಲ’

Last Updated 11 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ಕಾರವಾರ:‘ಜೊಯಿಡಾ ತಾಲ್ಲೂಕಿನ ಉಳವಿಯಲ್ಲಿ ಮಂಗಳವಾರದಿಂದ (ಫೆ.12) ನಡೆಯುವಚನ್ನಬಸವೇಶ್ವರ ಜಾತ್ರೆಗೆ ಯಾವ ಮಠಾಧೀಶರಿಗೂ ಆಹ್ವಾನ ನೀಡಿಲ್ಲ. ಅವರಾಗಿ ಬಂದರೆ ಗೌರವದಿಂದ ಸ್ವಾಗತಿಸಲಾಗುವುದು’ ಎಂದುಉಳವಿ ಚೆನ್ನಬಸವೇಶ್ವರ ಟ್ರಸ್ಟ್‌ ಉಪಾಧ್ಯಕ್ಷಸಂಜಯ ಬಸವರಾಜ ಕಿತ್ತೂರ ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ವರ್ಷ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾಶರಣರು ಆಮಂತ್ರಣ ಇಲ್ಲದಿದ್ದರೂ ರಥೋತ್ಸವಕ್ಕೆ ಬಂದಿ ದ್ದರು.ಆಗ ಅವರು ರಥವೇರಲು ಪಟ್ಟು ಹಿಡಿದ ಕಾರಣ ಉತ್ಸವಕ್ಕೆ ಅಡಚಣೆಯಾಗಿತ್ತು. ಈ ಬಾರಿ ಅವರಿಗೆ ಅವಕಾಶ ನೀಡುವುದು ಭಕ್ತರಿಗೆ ಬಿಟ್ಟ ವಿಚಾರ. ಒಂದು ವೇಳೆ ಈಸಲವೂಮಠಾಧೀಶರು ಬಂದು ಭಕ್ತರ ನಡುವೆ ವಾಗ್ವಾದ, ಹೊಡೆದಾಟನಡೆದರೆ ಅದಕ್ಕೆ ಅವರೇ (ಮಠಾಧೀಶರು) ಹೊಣೆಗಾರರು’ ಎಂದು ಹೇಳಿದರು.

‘ಮುರುಘಾ ಮಠದವರು ಉಳವಿ ದೇವಸ್ಥಾನವನ್ನು ತಮ್ಮ ಶಾಖಾ ಮಠ ಎಂದು ಹೇಳಿಕೊಳ್ಳುತ್ತಾರೆ. ದೇವಸ್ಥಾನ ಯಾರಿಗೆ ಸೇರಿದ್ದೆಂಬ ವಿಚಾರ ನ್ಯಾಯಾಲಯದಲ್ಲಿದೆ. ಗೊಂದಲ ಉಂಟಾಗ ಬಾರದು ಎಂದು ನಾವಾಗಿಯಾವುದೇಕಾವಿಧಾರಿಗಳಿಗೂಆಮಂತ್ರಣ ನೀಡಿಲ್ಲ’ ಎಂದುಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT