ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ವರ್ಷ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾಶರಣರು ಆಮಂತ್ರಣ ಇಲ್ಲದಿದ್ದರೂ ರಥೋತ್ಸವಕ್ಕೆ ಬಂದಿ ದ್ದರು.ಆಗ ಅವರು ರಥವೇರಲು ಪಟ್ಟು ಹಿಡಿದ ಕಾರಣ ಉತ್ಸವಕ್ಕೆ ಅಡಚಣೆಯಾಗಿತ್ತು. ಈ ಬಾರಿ ಅವರಿಗೆ ಅವಕಾಶ ನೀಡುವುದು ಭಕ್ತರಿಗೆ ಬಿಟ್ಟ ವಿಚಾರ. ಒಂದು ವೇಳೆ ಈಸಲವೂಮಠಾಧೀಶರು ಬಂದು ಭಕ್ತರ ನಡುವೆ ವಾಗ್ವಾದ, ಹೊಡೆದಾಟನಡೆದರೆ ಅದಕ್ಕೆ ಅವರೇ (ಮಠಾಧೀಶರು) ಹೊಣೆಗಾರರು’ ಎಂದು ಹೇಳಿದರು.