‘ಜಾಧವ ಲೋಕಸಭೆಗೆ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ. ಅಲ್ಲಿ ಹೆಚ್ಚುಕಡಿಮೆಯಾದರೆ, ಮತ್ತೆ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲು ಬಯಸಿದ್ದಾರೆ. ಎರಡೂ ಚುನಾವಣೆ ಏಕಕಾಲಕ್ಕೆ ನಡೆದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ರಾಜೀನಾಮೆ ಅಂಗೀಕಾರ ವಿಳಂಬವಾಗಿರುವುದು ಅವರಿಗೆ ಈ ಬಗೆಯ ‘ಸುರಕ್ಷತೆ’ ಕಲ್ಪಿಸಿಕೊಟ್ಟಂತಾಗಿದೆ’ ಎಂಬುದು ಮೂಲಗಳ ಮಾಹಿತಿ.