ಮೂರು ದಿನಗಳ ಶೈಕ್ಷಣಿಕ ಸಮಾವೇಶದಲ್ಲಿ ನಾಡಿನ ಖ್ಯಾತ ಇತಿಹಾಸಕಾರರಾದ ಪ್ರೊ.ಎ.ಕೆ ಶಾಸ್ತ್ರಿ, ಪ್ರೊ. ಎಂ.ವಿ. ಶ್ರೀನಿವಾಸ್, ಪ್ರೊ.ಬಿ.ಸಿ. ಮಹಾಬಲೇಶ್ವರಪ್ಪ, ಪ್ರೊ. ನರಸಿಂಗರಾಜ ನಾಯ್ಡು, ಪ್ರೊ. ರು.ಮ.ಷಡಕ್ಷರಯ್ಯ ಪಾಲ್ಗೊಂಡಿದ್ದರು. ಅಧಿವೇಶನದಲ್ಲಿ ದೂರದ ಕೋಲ್ಕತ್ತಾ, ಹೈದರಾಬಾದ್, ಗುಲ್ಬರ್ಗಾ, ಹಂಪಿ, ಬೆಳಗಾಂ, ಶಿವಮೊಗ್ಗ, ಧಾರವಾಡ, ದಾವಣಗೆರೆ, ಮೈಸೂರು, ತುಮಕೂರು ಮತ್ತು ಕೋಲಾರದ ಇತಿಹಾಸಕ್ತರು ಪಾಲ್ಗೊಂಡಿದ್ದರು.