ಬೆಂಗಳೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿಯ ಶಕ್ತಿ ವರ್ಧನೆಗೊಂಡಿದೆ. ಕಾಂಗ್ರೆಸ್ಗೆ ಸಮಾಧಾನಕರ ಫಲಿತಾಂಶ ದೊರೆತಿದೆ.
ಮಂಗಳೂರು ಮಹಾನಗರ ಪಾಲಿಕೆ ಕಾಂಗ್ರೆಸ್ನಿಂದ ಬಿಜೆಪಿ ತೆಕ್ಕೆಗೆ ಬಂದಿದ್ದರೆ, ದಾವಣಗೆರೆ ಪಾಲಿಕೆಯಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 6 ನಗರಸಭೆಗಳ ಪೈಕಿ 3 ಕಾಂಗ್ರೆಸ್ ಪಾಲಾಗಿದ್ದು, ಮೂರರಲ್ಲಿ ಅತಂತ್ರ ಸ್ಥಿತಿ ಇದೆ.
3 ಪುರಸಭೆ ಪೈಕಿ ತಲಾ ಒಂದರಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹಾಗೂ ಒಂದರಲ್ಲಿ ಅತಂತ್ರ ಸ್ಥಿತಿ ಇದೆ. 3 ಪಟ್ಟಣ ಪಂಚಾಯಿತಿಗಳಲ್ಲಿ ಎರಡರಲ್ಲಿ ಬಿಜೆಪಿ ಹಾಗೂ ಒಂದರಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಮದುವೆಯ ದಿನವೇ ಸೋಲು ಕಂಪ್ಲಿ: ಇಲ್ಲಿನ ಪುರಸಭೆ ಚುನಾವಣೆಯಲ್ಲಿ 8ನೇ ವಾರ್ಡಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಲ್.ರಾಜೇಶ್ ಅವರಿಗೆ ತಮ್ಮ ಮದುವೆಯ ದಿನವೇ ಸೋಲಿನ ಫಲಿತಾಂಶ ದೊರಕಿದೆ. ಪಟ್ಟಣದಲ್ಲಿ ಗುರುವಾರ ಅವರ ಮದುವೆ ಏರ್ಪಾಡಾಗಿತ್ತು. ಬಿಜೆಪಿಯ ಸುದರ್ಶನ ರೆಡ್ಡಿ ವಿರುದ್ಧ ಅವರು ಕೇವಲ 11 ಮತಗಳ ಅಂತರದಿಂದ ಸೋತಿದ್ದಾರೆ.