ಟಿ.ನರಸೀಪುರದ ಮಂಜುನಾಥ್ ಕರೆ ಮಾಡಿ, ಒಬ್ಬ ಫಲಾನುಭವಿಗೆ ಎರಡೆರಡು ಮನೆ ಮಂಜೂರು ಮಾಡಿರುವ ವಿಚಾರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಅನೇಕ ಗ್ರಾಮಗಳಲ್ಲಿ ಒಬ್ಬ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಮನೆ ಮಂಜೂರು ಮಾಡಿದ ಬಗ್ಗೆ ದೂರುಗಳು ಬಂದಿವೆ. ಗಂಡನಿಗೊಂದು ಮನೆ, ಹೆಂಡತಿಗೊಂದು ಮನೆ, ಉಪಪತ್ನಿಗೊಂದು ಮನೆ ನೀಡುವುದಕ್ಕೆ ನಾನು ಅವಕಾಶ ನೀಡುವುದಿಲ್ಲ’ ಎಂದರು.