ಬೆಂಗಳೂರು: ‘ಕರ್ನಾಟಕ ಲೋಕಾಯುಕ್ತಕ್ಕೆ ಹೊಸ ಘನತೆ ತಂದುಕೊಟ್ಟವರು ಮತ್ತು ಅದರ ಶಕ್ತಿಯನ್ನು ಸಮಾಜಕ್ಕೆ ಪರಿಚಯಿಸಿದವರು’ ಎಂದೇ ಇಂದು ನಿಧನರಾದ ನ್ಯಾಯಮೂರ್ತಿ ಎನ್.ವೆಂಕಟಾಚಲ ಅವರನ್ನು ರಾಜ್ಯದ ಜನರು ಗುರುತಿಸಿ ಗೌರವಿಸುತ್ತಾರೆ.
ಆದರೆಅವರು ಕರ್ನಾಟಕದ ಮೊದಲ ಲೋಕಾಯುಕ್ತರಲ್ಲ. ಇದು ತಪ್ಪು ಮಾಹಿತಿ. ರಾಜ್ಯದ ಹಲವಾರು ಮಂದಿತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿರುವ ಶ್ರದ್ಧಾಂಜಲಿ ಬರಹಗಳಲ್ಲಿ ‘ನ್ಯಾಯಮೂರ್ತಿ ಎನ್.ವೆಂಕಟಾಚಲ ರಾಜ್ಯದ ಪ್ರಥಮ ಲೋಕಾಯುಕ್ತರು’ ಎಂಬರ್ಥದ ಸಾಲು ಬರೆದುಕೊಂಡಿದ್ದಾರೆ.
ಬೆಂಗಳೂರು ಆಕಾಶವಾಣಿ ಕೇಂದ್ರವೂ ತನ್ನtwitter.com/airnews_bangಟ್ವಿಟರ್ ಅಕೌಂಟ್ನಲ್ಲಿ ಹೀಗೆ ಬರೆದಿದೆ.
ಕರ್ನಾಟಕದ ನಿವೃತ್ತ ಲೋಕಾಯುಕ್ತ ಹಾಗೂ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎನ್. ವೆಂಕಟಾಚಲ ವಯೋಸಹಜ ಖಾಯಿಲೆಯಿಂದ ಬೆಂಗಳೂರಿನಲ್ಲಿಂದು ನಿಧನರಾಗಿದ್ದಾರೆ. ಮೃತರಿಗೆ ೮೯ ವರ್ಷ ವಯಸ್ಸಾಗಿತ್ತು. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವೆಂಕಟಾಚಲ ಅವರು, ಕರ್ನಾಟಕದ ಪ್ರಥಮ ಲೋಕಾಯುಕ್ತರಾಗಿ ನೇಮಕಗೊಂಡಿದ್ದರು.
— AIR News Bangalore (@airnews_bang) October 30, 2019
‘ಕರ್ನಾಟಕದ ನಿವೃತ್ತ ಲೋಕಾಯುಕ್ತ ಹಾಗೂ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎನ್. ವೆಂಕಟಾಚಲ ವಯೋಸಹಜ ಖಾಯಿಲೆಯಿಂದ ಬೆಂಗಳೂರಿನಲ್ಲಿಂದು ನಿಧನರಾಗಿದ್ದಾರೆ. ಮೃತರಿಗೆ 89 ವರ್ಷ ವಯಸ್ಸಾಗಿತ್ತು. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವೆಂಕಟಾಚಲ ಅವರು, ಕರ್ನಾಟಕದ ಪ್ರಥಮ ಲೋಕಾಯುಕ್ತರಾಗಿ ನೇಮಕಗೊಂಡಿದ್ದರು’.
ಈ ಒಕ್ಕಣೆಯಲ್ಲಿರುವ ‘ಪ್ರಥಮ ಲೋಕಾಯುಕ್ತರಾಗಿ’ ಎನ್ನುವುದು ತಪ್ಪು ಮಾಹಿತಿ ಕೊಡುತ್ತವೆ. ವೆಂಕಟಾಚಲ ಅವರು ರಾಜ್ಯದ ನಾಲ್ಕನೇ ಲೋಕಾಯುಕ್ತರು.1986ರಿಂದ1991ರವರೆಗೆ ಕಾರ್ಯನಿರ್ವಹಿಸಿದ್ದ ಎ.ಡಿ.ಕೌಶಲ್ ರಾಜ್ಯದ ಮೊದಲ ಲೋಕಾಯುಕ್ತರಾಗಿ ಕೆಲಸ ಮಾಡಿದ್ದರು.
ನಂತರ ರವೀಂದ್ರನಾಥ್ ಪೈನೆ (1991–1996),ಅಬ್ದುಲ್ ಹಕೀಂ (1996–2001),ಎನ್.ವೆಂಕಟಾಚಲ (2001–2006),ಸಂತೋಷ್ ಹೆಗ್ಡೆ (2006 – 2010),ಶಿವರಾಜ್ ಪಾಟೀಲ್ 2011 ಜುಲೈ– ಸೆಪ್ಟೆಂಬರ್,ವೈ.ಭಾಸ್ಕರ ರಾವ್ (2013ರ ಫೆಬ್ರುವರಿಯಿಂದ 2015ರ ಡಿಸೆಂಬರ್) ಲೋಕಾಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತಪಿ.ವಿಶ್ವನಾಥ ಶೆಟ್ಟಿ (2017ರ ಜನವರಿಯಿಂದ ಈವರೆಗೆ) ಲೋಕಾಯುಕ್ತರಾಗಿದ್ದಾರೆ.
ಈ ಮಾಹಿತಿಯನ್ನು ಲೋಕಾಯುಕ್ತ ವೆಬ್ಸೈಟ್ಮತ್ತುವಿಕಿಪಿಡಿಯಾದಲ್ಲಿರುವKarnataka_Lokayukta ಪುಟ ಪುಷ್ಟೀಕರಿಸುತ್ತದೆ.
ವೆಂಕಟಾಚಾಲ ಪ್ರಥಮ ಲೋಕಾಯುಕ್ತರಾಗಿದ್ದರು ಎನ್ನುವ ತಪ್ಪು ಮಾಹಿತಿಇನ್ನೂ ಕೆಲವೆಡೆ ಕಂಡು ಬರುತ್ತಿದೆ.
ಭ್ರಷ್ಟರಿಗೆ ದುಸ್ವಪ್ನವಾಗಿದ್ದ ಕರ್ನಾಟಕದ ಮೊದಲ ಲೋಕಾಯುಕ್ತ ಶ್ರೀ ಎನ್.ವೆಂಕಟಾಚಲ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ
— ನನ್ನ ಕರ್ನಾಟಕ / Nanna Karnataka (@Nanna_Karnataka) October 30, 2019
ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗು ಕುಟುಂಬಕ್ಕೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇವೆ.#NannaKarnataka #Lokayuktha pic.twitter.com/cEZo3BBUZz
#FormerLokayukta #NVenkatachala #passesaway
— kannadaprabha (@KannadaPrabha) October 30, 2019
ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ರಾಜ್ಯದ ಮೊದಲ ಲೋಕಾಯುಕ್ತ ಎನ್.ವೆಂಕಟಾಚಲ ವಿಧಿವಶhttps://t.co/tpmC2aOnDq
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ, ಕರ್ನಾಟಕದ ಮೊದಲ ಲೋಕಾಯುಕ್ತರಾಗಿ ಲೋಕಾಯುಕ್ತ ಸಂಸ್ಥೆಗೆ ಘನತೆ ತಂದುಕೊಟ್ಟ ನಿಷ್ಠೆ ಮತ್ತು ದಕ್ಷತೆಗೆ ಹೆಸರಾಗಿದ್ದ ಶ್ರೀ ವೆಂಕಟಾಚಲಯ್ಯ ರವರು ಇಂದು ನಮ್ಮನ್ನು ಅಗಲಿದ್ದು ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ🙏 pic.twitter.com/eOYv0Cczub
— Patel K Anandreddy (@189Nihal) October 30, 2019
ಕರ್ನಾಟಕದ ಲೋಕಾಯುಕ್ತಕ್ಕೆ ಮೊದಲ ಲೋಕಾಯುಕ್ತರಾಗಿದ್ದ ಭ್ರಷ್ಟರ ಪಾಲಿನ
— Muniraju Gowda PM (@tulasimuniraju1) October 30, 2019
ಸಿಂಹಸ್ವಪ್ನ, ಲೋಕಾಯುಕ್ತ ಹುದ್ದೆಯ ಘನತೆಯನ್ನ ಎತ್ತಿ ಹಿಡಿದ ನಿವೃತ್ತ
ನ್ಯಾಯಮೂರ್ತಿ ಎನ್. ವೆಂಕಟಾಚಲ ಅವರ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ. pic.twitter.com/3a3E4UIqAu
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.