ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು, ಕಾಂಗ್ರೆಸ್ ಸೇರಿದಂತೆ ಪ್ರಜಾಸತ್ತಾತ್ಮಕ ನಿಲುವು ಹೊಂದಿರುವ ರಾಜಕೀಯ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬುದು ಯೆಚೂರಿ ಅವರ ನಿಲುವಾಗಿತ್ತು. ಪ್ರಕಾಶ್ ಕಾರಟ್ ಅವರ ಬಣ ಯೆಚೂರಿಯವರ ನಿಲುವನ್ನು ವಿರೋಧಿಸಿತ್ತು. ಹೀಗಾಗಿಯೇ ಅವರು ತಮ್ಮ ಕರಡನ್ನು ಮಂಡಿಸದಂತೆ ತಡೆಯಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.