‘ಸಂವಿಧಾನವನ್ನು ನಾವು ಪೂಜಿಸುತ್ತಿದ್ದೇವೆ, ಆದರೆ ಆಚರಿಸುತ್ತಿಲ್ಲ. ಬಡವರಿಗೊಂದು ಶಿಕ್ಷಣ, ಶ್ರೀಮಂತರಿಗೊಂದು ಶಿಕ್ಷಣ ಎಂಬಂತಹ ಸ್ಥಿತಿ ಇದೆ. ಅಧಿಕಾರಶಾಹಿ ಸರಿಯಾಗಿ ಕೆಲಸ ಮಾಡದೆ, ನ್ಯಾಯಾಂಗವೂ ಭ್ರಷ್ಟವಾದ ಮೇಲೆ ಸಂವಿಧಾನದ ಆಶಯಗಳು ಜಾರಿಗೆ ಬರಲಾರದು, ಇನ್ನೂ ಹಲವು ವರ್ಷ ಕಳೆದರೂ ಮುಂದುವರಿದ ರಾಷ್ಟ್ರಗಳ ಸಾಲಿಗೆ ದೇಶ ಬಂದು ನಿಲ್ಲುವುದು ಕಷ್ಟ’ ಎಂಬ ಗಂಭೀರ ಎಚ್ಚರಿಕೆ ನೀಡಿದರು.