‘ಹಳ್ಳದ ಮೂಲಕ ದಾಟಿದರೆ ನಾಲ್ಕೈದು ಹಳ್ಳಿಗಳಿಗೆ ಸಂಪರ್ಕ ಸಾಧ್ಯವಾಗುತ್ತದೆ. ಈ ಮೊದಲು ಊರಿನವರೆಲ್ಲ ಸೇರಿ ನಿರ್ಮಿಸಿದ್ದ ಕಾಲುಸಂಕವಿತ್ತು. ಅದು ಪ್ರವಾಹದಲ್ಲಿ ತೇಲಿ ಹೋಯಿತು. ಬೇಸಿಗೆಯಲ್ಲಿ ಹಳ್ಳಕ್ಕೆ ಇಳಿದು ದಾಟಬಹುದು. ಆದರೆ, ಮಳೆಗಾಲದಲ್ಲಿ ಸಾಧ್ಯವೇ ಇಲ್ಲ. ಹಾಗಾಗಿ ಅಡಿಕೆ ಮರಗಳನ್ನು ಕಟ್ಟಿ ಕಾಲುಸಂಕ ನಿರ್ಮಿಸಲಾಗಿದೆ. ಅದು ನಿರಂತರ ಮಳೆಯಿಂದ ಪಾಚಿ ಹಿಡಿದುಕೊಂಡು ಜಾರುತ್ತಿದ್ದು, ಅಪಾಯಕಾರಿಯಾಗಿದೆ’ ಎಂದರು.