ಕೃಷ್ಣಾ ನದಿ ಪ್ರವಾಹಕ್ಕೆ ತುತ್ತಾಗಿ ಮನೆ, ಆಸ್ತಿಪಾಸ್ತಿ ಕಳೆದುಕೊಂಡಿರುವ ಸಂತ್ರಸ್ತರು, ಸಮರ್ಪಕ ಪರಿಹಾರ ಬಂದಿಲ್ಲದಿರುವುದಕ್ಕೆ ಬಿಸಿ ಮುಟ್ಟಿಸಿದರು. ‘ಪರಿಹಾರ ಸಿಗುವವರೆಗೆ ನಾವು ಮತದಾನ ಮಾಡುವುದಿಲ್ಲ. ನಮ್ಮ ಗ್ರಾಮಕ್ಕೆ ಪ್ರಚಾರ ಮಾಡಬೇಡಿ. ಚುನಾವಣೆ ಬಂದಾಗ ಮಾತ್ರ ಎಲ್ಲರೂ ಬರುತ್ತೀರಿ’ ಎಂದು ತರಾಟೆಗೆ ತೆಗೆದುಕೊಂಡರು.