ಮತದಾನ ಬಹಿಷ್ಕರಿಸಿ, ಗ್ರಾಮದ ಮುಖ್ಯರಸ್ತೆಗೆ ಅಡ್ಡಲಾಗಿ ಕುಳಿತುಕೊಂಡು ಜಿಲ್ಲಾಡಳಿತ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಸಹಾಯಕ ಚುನಾವಣಾಧಿಕಾರಿ ಶೇಖ್ ತನ್ವೀರ್ ಆಸಿಫ್ ಗ್ರಾಮಸ್ಥರ ಮನವೊಲಿಸಿದರು. ಬೆಳಿಗ್ಗೆ ಎಂಟು ಗಂಟೆಗೆ ಆರಂಭಗೊಂಡ ಧರಣಿ 11.30ಕ್ಕೆ ಕೈಬಿಟ್ಟು, ಬಳಿಕ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಧರಣಿಗೂ ಮುನ್ನ ಒಟ್ಟು 1,360 ಮತದಾರರ ಪೈಕಿ 21 ಜನರಷ್ಟೇ ಮತದಾನ ಮಾಡಿದ್ದರು.