‘ಮೊದಲು ದಾಖಲಾದ ನಾಲ್ವರಲ್ಲಿ ಹೊಟ್ಟೆ ನೋವು, ಕಣ್ಣುರಿ, ತಲೆ ನೋವು, ವಾಂತಿ ಬೇಧಿ ಕಾಣಿಸಿಕೊಂಡಿತ್ತು. ನಂತರ ದಾಖಲಾದ 12 ಮಂದಿ ಭೀತಿಗೆ ಒಳಗಾಗಿ ಅಸ್ವಸ್ಥರಾಗಿದ್ದರು. ಈಗ ಎಲ್ಲರೂ ಗುಣಮುಖರಾಗಿದ್ದು ಅವರನ್ನು ಶನಿವಾರ ಬಿಡುಗಡೆ ಮಾಡಲಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಮೇಶ್ ಗುತ್ತೇದಾರ ತಿಳಿಸಿದರು.