‘ದಾಖಲೆಗಳು ನನ್ನ ಬಳಿ ಇರುವ ಕಾರಣ ಯಡಿಯೂರಪ್ಪ, ಸಂತೋಷ್ ಹಾಗೂ ಅವರ ಬೆಂಬಲಿಗರಿಂದ ನನ್ನ ಜೀವಕ್ಕೆ ಅಪಾಯವಿದೆ. ಈ ನಡುವೆ ಮನೆ ಸುತ್ತಮುತ್ತ ಅಪರಿಚಿತರ ಓಡಾಟ ಹೆಚ್ಚಾಗಿದ್ದು, ನನ್ನ ವಾಹನವನ್ನೂ ಕೆಲವರು ಹಿಂಬಾಲಿಸುತ್ತಿದ್ದಾರೆ. ಇದರಿಂದ ಭಯದ ವಾತಾವರಣದಲ್ಲೇ ಬದುಕುತ್ತಿದ್ದೇನೆ’ ಎಂದು ವಿನಯ್ ಮನವಿ ಪತ್ರದಲ್ಲಿ ಹೇಳಿದ್ದಾರೆ.