ಘರ್ಷಣೆಯ ಮಾಹಿತಿ ತಿಳಿದು ಜೇವರ್ಗಿ ಸರ್ಕಲ್ ಇನ್ಸ್ಪೆಕ್ಟರ್ ಡಿ.ಬಿ. ಪಾಟೀಲ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿದರು. ಆಗಲೂ ಗುಂಪೊಂದು ಪೊಲೀಸರ ವಾಹನದತ್ತ ಕಲ್ಲು ತೂರಿತು. ಗ್ರಾಮದಲ್ಲಿ ಪರಿಸ್ಥಿತಿ ಇನ್ನೂ ಬಿಗುವಿನಿಂದ ಕೂಡಿದ್ದು, ಪೊಲೀಸ್ ಪಹರೆ ಹಾಕಲಾಗಿದೆ.ಗಾಯಾಳುಗಳನ್ನು ಕಲಬುರ್ಗಿ, ಜೇವರ್ಗಿ, ಯಡ್ರಾಮಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.