ಹಣವಿಲ್ಲದೆ ಬೆಂಗಳೂರಲ್ಲೇ ಅಂತ್ಯ ಸಂಸ್ಕಾರ: ‘ಕಿಮ್ಸ್ನಲ್ಲಿ ಚೇತರಿಕೆ ಕಾಣದಿದ್ದರಿಂದ ವೈದ್ಯರ ಸಲಹೆ ಮೇರೆಗೆ, ದಾನಿಯೊಬ್ಬರ ನೆರವಿನಿಂದ ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಗೆ, ಅಲ್ಲಿಂದ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದೆವು. ಅಲ್ಲೂ ಚಿಕಿತ್ಸೆಗೆ ಸ್ಪಂದಿಸದೆ ಅ.27ರಂದು ಮೃತಪಟ್ಟ. ಊರಿಗೆ ಮೃತದೇಹ ತರಲು ಹಣವಿಲ್ಲದಿದ್ದರಿಂದ, ಮರಣೋತ್ತರ ಪರೀಕ್ಷೆ ಮುಗಿದ ಬಳಿಕ, ಅಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಿದೆವು’ ಎಂದು ಕಣ್ಣೀರಿಟ್ಟರು.